Thursday, April 30, 2009

ಹೀಗೊಂದು ಬಲಾತ್ಕಾರದ ಕತೆ.. Rape!! they cried..


ಬಲಾತ್ಕಾರ ಅತ್ಯಂತ ಹೀನಾತಿಹೀನ ಅಪರಾಧ ಅನ್ನುವುದರಲ್ಲಿ ಸಂಶಯವೇ ಇಲ್ಲ. ಬಲಾತ್ಕಾರದಂತಹ ಹೇಯ ಕೃತ್ಯವನ್ನೆಸಗಿದ ವ್ಯಕ್ತಿಗೆ, ಭಾರತೀಯ ಪೀನಲ್ ಕೋಡ್ ನ ಸೆಕ್ಷನ್ ೩೭೫ ರ ಅನ್ವಯ ಅತ್ಯಂತ ಕಠಿಣ ಶಿಕ್ಷೆಯನ್ನು ನೀಡಲಾಗುತ್ತದೆ. ಹೆಂಗಸೊಬ್ಬಳ ಅನುಮತಿ ಇಲ್ಲದೇ ಅವಳನ್ನು ಸಂಭೋಗಕ್ಕೀಡು ಮಾಡುವುದು ರೇಪ್/ ಬಲಾತ್ಕಾರ ಎನಿಸಿಕೊಳ್ಳುತ್ತದೆ. {Rape means an unlawful intercourse done by a man with a woman without her valid consent. (Section 375 of the Indian Penal Code)} ಅದೇ ಕಾನೂನಿನ ಅನ್ವಯ, ಈ ಆರು ಪರಿಸ್ಥಿತಿಗಳಲ್ಲಿ ವ್ಯಕ್ತಿಯೊಬ್ಬನು ಹೆಂಗಸೊಬ್ಬಳ ಜೊತೆ ಸಂಭೋಗವನ್ನು ನಡೆಸಿದರೆ ಅದು ’ಬಲಾತ್ಕಾರ’ ಎನಿಸಿಕೊಳ್ಳುತ್ತದಂತೆ.

೧. ಅವಳಿಗೆ ಇಚ್ಛೆ ಇಲ್ಲದಿದ್ದಾಗ.
೨. ಅವಳ ಅನುಮತಿ ಇಲ್ಲದಿದ್ದಾಗ.
೩. ಆಕೆಗೆ ಅಥವಾ ಆಕೆಯ ಇಷ್ಟದ ವ್ಯಕ್ತಿಗೆ ಜೀವ ಭಯ ಅಥವಾ ಬೇರೆ ಯಾವುದೇ ಥರದ ಬೆದರಿಕೆಯನ್ನೊಡ್ಡಿ, ಆಕೆಯ ಅನುಮತಿಯನ್ನು ಬಲವಂತವಾಗಿ
ಪಡೆದು, ಅವಳ ಜೊತೆ ಸಮಾಗಮ ಕ್ರಿಯೆಯನ್ನು ಮಾಡಿದಾಗ.
೪. ಸ್ತ್ರೀಯೊಬ್ಬಳು ಇನ್ನೊಬ್ಬ ವ್ಯಕ್ತಿಯ ಹೆಂಡತಿ ಎಂದು ತಿಳಿದಿದ್ದಾಗಲೂ, ಮತ್ತು ಆ ಸ್ತ್ರೀ, ಆ ಪುರುಷನನ್ನು ತನ್ನ 'lawful' ಗಂಡ ಎಂದು ಭಾವಿಸಿ, ಸಮಾಗಮ
ಕ್ರಿಯೆಗೆ ತನ್ನ ಅನುಮತಿಯನ್ನಿತ್ತಾಗ.
೫. ಸ್ತ್ರೀಯೊಬ್ಬಳು ಲೈಂಗಿಕ ಸಮಾಗಮಕ್ಕೆ ಅನುಮತಿ ನೀಡುವ ಸಮಯದಲ್ಲಿ ಆಕೆಯ ಚಿತ್ತ ಭ್ರಮಣೆಯಾಗಿದ್ದರೆ ಅಥವಾ ಅಥವಾ ಬಲಾತ್ಕಾರ ಎಸಗುವ
ಪುರುಷನು ಸ್ವತಃ ಅಥವಾ ಇನ್ಯಾವುದೇ ವ್ಯಕ್ತಿಯ ಮೂಲಕ ಅವಳಿಗೆ ಮತ್ತು ಬರೆಸುವ, ಬುದ್ಧಿ ಮಂಕು ಮಾಡುವ (stupefying) , ಅನಾರೋಗ್ಯಕರ
(unwholesome) ವಸ್ತುಗಳನ್ನು ನೀಡಿದಾಗ, ಆಕೆ ಅನುಮತಿ ನೀಡಿದಾಗ, ಆಕೆಯ ಜೊತೆ ಏನಾಗಬಹುದು ಎಂಬ ಪರಿವೆಯೇ ಆಕೆಗೆ ಇಲ್ಲದಂತಾಗಿ, ಆಕೆ
ಅನುಮತಿ ನೀಡಿ, ಆ ಪುರುಷ ಆಕೆಯ ಜೊತೆ ಸಮಾಗಮ ನಡೆಸಿದರೆ.
೬. ಮಹಿಳೆಯ ವಯಸ್ಸು ೧೬ ಕ್ಕಿಂತ ಕಡಿಮೆ ಇದ್ದರೆ (ಅವಳ ಅನುಮತಿ ಇರಲಿ ಆಥವಾ ಇಲ್ಲದಿರಲಿ).

ಇಷ್ಟೇ ಅಲ್ಲದೇ ಇನ್ನೂ ಕೆಲವು ಉಪ-ಕಾನೂನುಗಳು, ನಿಯಮಗಳು, ವಿವರಣೆಗಳು ಇವೆ. (ಉದಾಹರಣೆಗೆ- ವಿವಾಹದಲ್ಲಿ ಬಲಾತ್ಕಾರಕ್ಕೆ ಸಂಬಂಧಿಸಿದ ಕಾನೂನು)

ಬಲಾತ್ಕಾರ ಎಂಬ ಅಪರಾಧವೆಸಗಿದ ವ್ಯಕ್ತಿಗೆ ಕನಿಷ್ಟ ೭ ವರ್ಷಗಳ ಜೈಲುವಾಸ ಖಚಿತ. ಕೆಲವು ಕೇಸ್ ಗಳಲ್ಲಿ ಮರಣೆ ದಂಡನೆಯೂ ಆಗಬಹುದು.ಅತ್ಯಂತ ಕಠಿಣವಾದ ಈ ಕಾನೂನಿನಲ್ಲಿ ಕೇವಲ ಒಂದು ತಪ್ಪಿದೆ. ನಮ್ಮ ದೇಶದ ಕಾನೂನಿನನ್ವಯ, ’ಬಲಾತ್ಕಾರ’ ನಡೆದಿದೆ ಎಂದು ಹೇಳಲು ಯಾವುದೇ ಸಾಕ್ಷಿ ಬೇಕಾಗಿಲ್ಲ. ಅಥವಾ "ನಡೆದ ಲೈಂಗಿಕ ಸಮಾಗಮಕ್ಕೆ ತನ್ನ ಅನುಮತಿ ಇರಲಿಲ್ಲ" ಎಂದು ಮಹಿಳೆಯು ಹೇಳಿಕೆಯನ್ನು ನೀಡಿದರೆ ಸಾಕು, ಪುರುಷ ನೇರ ಜೈಲಿಗೆ.

ಟಿ.ಐ.ಎಸ್.ಎಸ್ ಬಲಾತ್ಕಾರ ಕಾಂಡ, ನಡೆದ ಕತೆ:

ಅಮೇರಿಕೆಯ ಅನಿವಾಸಿ ಭಾರತೀಯ ಯುವತಿಯೊಬ್ಬಳು (ಹೆಸರು ತಿಳಿದಿಲ್ಲ. ಯಾವುದೇ ಪತ್ರಿಕೆ ಅಥವಾ ಟಿ.ವಿ ಚಾನೆಲ್ಲುಗಳು ಆಕೆಯ ಹೆಸರನ್ನು ಹೇಳಿಲ್ಲ. ಆಕೆಯ ಮಾನ ಹೋಗಬಹುದೆಂಬ ವಿಶೇಷ ಕಾಳಜಿಯಂತೆ) ಮುಂಬಯಿಯ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸಾಯನ್ಸಸ್ ನ ವಿದ್ಯಾರ್ಥಿನಿ. ಕೆಲವು ದಿನಗಳ ಹಿಂದೆ ಒಂದು ಶನಿವಾರ, ಆಕೆ ತನ್ನ ಹಾಸ್ಟೆಲ್ ನ ಗೆಳತಿಯಾದ ಎನಿ ಬ್ರೌನ್ ಎಂಬಾಕೆಯ ಜೊತೆ ತಡರಾತ್ರಿ, ದೇವನಾರ್ ಎಂಬಲ್ಲಿರುವ ಕೆಫೇ ಎಕ್ಸ್ ಓ ಎಂಬ ಹೋಟಲ್ಲಿಗೆ ಪಾರ್ಟಿ ಮಾಡಲು ಹೋಗಿದ್ದಳಂತೆ. ಅಲ್ಲಿ ಎನಿ ಬ್ರೌನಳ ಐದು ಜನ ಗೆಳೆಯರು ಭೇಟಿಯಾದರಂತೆ. ವಿನಮ್ರ ಸೋನಿ, ಜಸ್ ಕರಣಸಿಂಗ್ ಭುಲ್ಲರ್, ಹರ್ಷವರ್ಧನ್, ಅನಿಶ್ ಬೋರಕಟ್ಕಿ, ಹಾಗೂ ದರಾಯಸ್ ಕೊಲಾಬಾವಾಲ ಎಂಬ ಈ ಹುಡುಗರು (ಎಲ್ಲರ ಹೆಸರು ಎಲ್ಲ ಪತ್ರಿಕೆಗಳಲ್ಲಿ ದಪ್ಪಕ್ಷರಗಳಲ್ಲಿ ಬಂದಿವೆ. ಇವೆಂಚುವಲಿ, ಅವರು ನಿರಪರಾಧಿ ಎಂದು ಸಾಬೀತಾದರೆ, ಅವರ ಮಾನಹಾನಿಯ ಬಗ್ಗೆ ಕಿಂಚಿತ್ ಪರಿವೆ ಯಾವನಿಗೂ ಇಲ್ಲ. ವಾಹ್ ರೆ ಮೀಡಿಯಾ!!). ನೇರವಾಗಿ ಪರಿಚಯವೇ ಇಲ್ಲದ ಆ ಹುಡುಗರು, ಅವಳಿಗೆ ಅಗತ್ಯಕ್ಕಿಂತ ಹೆಚ್ಚು ಮದ್ಯವನ್ನು ಕುಡಿಸಿದಂತೆ. ನಶೆ ಏರಿದಾಗ ಆಕೆ ತನ್ನ ಬಾಯ್ ಫ್ರೆಂಡ್ ನನ್ನು ಭೇಟಿಯಾಗುವ ಇಚ್ಛೆಯನ್ನು ಜಾಹೀರುಪಡಿಸಿದಳಂತೆ. ಆ ಹುಡುಗರು ಅವಳನ್ನು ಡ್ರಾಪ್ ಮಾಡ್ತೀವಿ ಬಾ ಅಂತ ಕರೆದೊಯ್ದರಂತೆ. ಪರಿಚಯವೇ ಇಲ್ಲದ ಹುಡುಗರ ಜೊತೆ ಈಯಮ್ಮ ನಡೆದಳಂತೆ. (ಆ ಹುಡುಗರ ಪರಿಚಯವಿದ್ದ ಎನಿ ಬ್ರೌನ್ ಎಂಬ ಹುಡುಗಿ ನಾನು ಬರಲಾರೆ ಎಂದು ಹೇಳಿ ಹಾಸ್ಟೆಲ್ಲಿಗೆ ಮರಳಿದಳಂತೆ). ಈ ಹುಡುಗರು ಅವಳನ್ನು ನೇರವಾಗಿ ಅಂಧೇರಿಯ ಸಾತ್ ಬಂಗಲೆಯಲ್ಲಿರುವ ತಮ್ಮ ಗೆಳೆಯನೊಬ್ಬನ (ಕುಂದನ್ ಗೋಹೇನ್ ಎಂದು ಆತ ಹೆಸರು) ಫ್ಲ್ಯಾಟಿಗೆ ಕರೆದೊಯ್ದರಂತೆ. ಇವಳು ಅಲ್ಲಿಗೂ ಹೋದಳಂತೆ. ಅಲ್ಲಿ ಇವಳಿಗೆ ಭಯ ಶುರುವಾಯಿತಂತೆ. ಬಾಥ್ ರೂಮಿಗೆ ಹೋಗಿ ಚಿಲಕ ಹಾಕಿಕೊಂಡು ತನ್ನ ಬಾಯ್ ಫ್ರೆಂಡ್ ಗೆ ಫೋನ್ ಮಾಡಿದಳಂತೆ, ’ನಾನು ತೊಂದರೆಯಲ್ಲಿದ್ದೇನೆ ಬೇಗ ಬಾ’ ಅಂತ. ಆತ ಕ್ಯಾರೇ ಮಾಡಲಿಲ್ಲವಂತೆ. ನಶೆಯಲ್ಲಿದ್ದಳಲ್ಲಾ, ಹೀಗಾಗಿ ೧೦೦ ಅಂತ ಒಂದು ನಂಬರ್ರಿದೆ, ಅದನ್ನು ಡಾಯಲ್ ಮಾಡಿದರೆ, ನೇರ ಕರೆ ಪೋಲೀಸರಿಗೆ ಹೋಗುತ್ತದೆ ಎನ್ನುವುದನ್ನು ಮರೆತಿರಬೇಕು ಪಾಪ. ಇರಲಿ. ಹೊರಬಂದ ಆಕೆ ಪ್ರಜ್ಞೆ ತಪ್ಪಿಬಿದ್ದಳಂತೆ. ಬೆಳಿಗ್ಗೆ ಎಚ್ಚರವಾದಾಗ
ಮೈ ಮೇಲೆ ಇದ್ದ ಕನಿಷ್ಟ ಬಟ್ಟೆಗಳನ್ನು ನೋಡಿ ತನ್ನ ಜೊತೆ ಬಲಾತ್ಕಾರವಾಗಿರಬಹುದು ಎನ್ನುವ ಸಂಶಯ ಬಂತಂತೆ. ಮುಂಜಾನೆ ಎದ್ದಾಗ, ಆ ಪುಂಡ ಹುಡುಗರು ಅವಳಿಗೆ ಕಾಂಟ್ರಾಸೆಪ್ಟಿವ್ ಮಾತ್ರೆಯನ್ನೂ ನೀಡಿದರಂತೆ. ಅಲ್ಲಿಂದ ನೇರ ಆಕೆ ತನ್ನ ಹಾಸ್ಟೆಲಿಗೆ ಬಂದು ಮಲಗಿದಳಂತೆ. ರಾತ್ರಿ ತನ್ನ ಗೆಳತಿ ಎನಿಗೆ ನಡೆದಿದ್ದನ್ನು (ನಡೆದಿರಬಹುದಾದದ್ದನ್ನು) ಸವಿಸ್ತಾರವಾಗಿ ಹೇಳಿದಳಂತೆ. ಆಗ ಎನಿ ನೀಡಿದ ಸಲಹೆಯ ಪ್ರಕಾರ ಹಾಸ್ಟೆಲಿನ ವಾರ್ಡನ್ ಗೆ ಎಲ್ಲಾ ತಿಳಿಸಿದಳಂತೆ. ಮಂಗಳವಾರ ಪೋಲೀಸರ ಬಳಿ ಎಫ್. ಐ. ಅರ್ ದರ್ಜು ಮಾಡಲಾಯ್ತಂತೆ.

ನಂತರ ಶುರುವಾಗಿತ್ತು ಪೋಲೀಸರ ಯೂಶುವಲ್ ಕವಾಯತ್ತು. ಮೀಡಿಯಾ ಸರ್ಕಸ್ಸು. ಕಂಡಕಂಡವರೆಲ್ಲಾ ಆ ಹುಡುಗಿಯನ್ನು ವಿಕ್ಟಿಂ ಅಂದು ಅನುಕಂಪದ ಮಳೆಯನ್ನೇ ಸುರಿದರು. ಆ ಹುಡುಗರ ಮೃಗೀಯ ವರ್ತನೆಯ ಖಂಡನೆಗಳಾದವು. ಅವರಿಗೆ ಎಂತಹ ಶಿಕ್ಷೆಯನ್ನು ಕೊಡಬೇಕು ಎಂಬುದರ ಬಗ್ಗೆ ಹಲವು ಲೇಖನಗಳು ಬಂದವು. ಆಜ್ ತಕ್ ಎಂಬ ಮಹಾನ್ ಚಾನೆಲ್ಲಿನಲ್ಲಿ ಒಂದು ಗಂಟೆಯ ಪ್ರೈಮ್ ಟೈಂ ಕಾರ್ಯಕ್ರಮವೂ ಆಯಿತು. ಅಷ್ಟರಲ್ಲಿ ಯಾರೋ ಮಹಾತ್ಮನೊಬ್ಬ, ಆರ್ಕುಟ್. ಫೇಸ್ ಬುಕ್ ನಲ್ಲಿ ಎಂ.ಫಿಲ್ ನಂತಹ ಸಂಶೋಧನೆ ನಡೆಸಿ, ಆ ಹುಡುಗರು ಅಂಥವರಲ್ಲ, ಒಳ್ಳೆಯವರು, ಅವರ ಮಧ್ಯೆ ನಡೆದದ್ದು ಅನುಮತಿ ಬದ್ಧ ಸಮಾಗಮ (ಕನ್ಸೆನ್ಶುವಲ್ ಸೆಕ್ಸ್) ಇರಬೇಕು ಎಂಬ ಲೇಖನ ಬರೆದುಬಿಟ್ಟ. ಅದನ್ನು ಓದಿದ ಮಹಿಳಾ ಮಣಿಯೊಬ್ಬಳು ’ಹಾಗೆಲ್ಲ ಬರೆಯಬಾರದು, ಅಕ್ಯೂಸ್ಡ್ ಗಳ ಬಗ್ಗೆ ಒಳ್ಳೆಯ ಮಾತುಗಳನ್ನು ಬರೆದರೆ, ಆ ಕೇಸ್ ಬಲಹೀನವಾಗಬಹುದು, ವಿಕ್ಟಿಂ ಬಗ್ಗೆ ಜನರಿಗೆ ಸಹಾನುಭೂತಿ ಇರದು’ ಎಂದು ಪ್ರತಿ ಲೇಖನ ಬರೆದಳು. ಶುರುವಾಯಿತು ಮೇಲ್ ಶೌವಿನಿಸ್ಟ್ ಪುರುಷ ಹಾಗೂ ಫೆಮಿನಿಸ್ಟ್ ಮಹಿಳೆಯರ ಮಧ್ಯ ಒಂದು ಹೋರಾಟ. ಇನ್ನೂ ನಡೆಯುತ್ತಲೇ ಇದೆ.

ಈ ಒಂದು ಘಟನೆ ಹಾಗೂ ಅದರ ನಂತರದ ಆಗುಹೋಗುಗಳನ್ನು ಗಮನಿಸಿದಾಗ, ಕಂಡು ಬರುವ ಒಂದು ವಿಷಯವೆಂದರೆ ಭಾರತದ ಇತರ ಕಾನೂನುಗಳಂತೆ ಈ ಕಾನೂನನ್ನೂ ಕೂಡ ಸುಲಭವಾಗಿ ದುರುಪಯೋಗ ಮಾಡುವ ಸಂಭವವಿದೆ. ಮೊಟ್ಟ ಮೊದಲು ರೇಪ್ ಎಂಬುದರ ಕಾನೂನಿ ಪರಿಭಾಷೆಯನ್ನು ನೋಡಿದರೆ, Rape means an unlawful intercourse done by a man with a woman without her valid consent ಎಂದು ಹೇಳಲಾಗಿದೆ. ಇದರಲ್ಲಿ ಒಂದು catch ಇದೆ. ಸಮಾಗಮ ಕ್ರಿಯೆಯಲ್ಲಿ ಮಹಿಳೆಯ consent ಇದ್ದರೆ ಮಾತ್ರ ಸಾಕಾಗುವುದಿಲ್ಲ. ಆ consent, valid ಆಗಿರಬೇಕು. ಅಂದರೆ ಮಹಿಳೆಯೊಬ್ಬಳ ಜೊತೆ ಲೈಂಗಿಕ ಸಮಾಗಮ ಮಾಡುವಾಗ ಕೇವಲ ಅವಳ ಒಪ್ಪಿಗೆ ಇದ್ದರೆ ಸಾಕಾಗಲಾರದು. ಆ ಒಪ್ಪಿಗೆ Valid ಆಗಿರಬೇಕು. ಆ ಒಪ್ಪಿಗೆ ಯಾವ sense ನಲ್ಲಿ valid ಆಗಿರಬೇಕೆಂಬ ಚರ್ಚೆ ಇಲ್ಲ. ಅರ್ಥವಾಗಲಾರದ ಕಾನೂನು ಇದು.

ಇನ್ನು ಬಲಾತ್ಕಾರದ ಪರಿಭಾಷೆಯ ನಾಲ್ಕನೇ ಅಂಶವನ್ನು ನೋಡಿ. " ಸ್ತ್ರೀಯೊಬ್ಬಳು ಇನ್ನೊಬ್ಬ ವ್ಯಕ್ತಿಯ ಹೆಂಡತಿ ಎಂದು ತಿಳಿದಿದ್ದಾಗಲೂ, ಮತ್ತು ಆ ಸ್ತ್ರೀ, ಆ ಪುರುಷನನ್ನು ತನ್ನ 'lawful' ಗಂಡ ಎಂದು ಭಾವಿಸಿ, ಸಮಾಗಮ ಕ್ರಿಯೆಗೆ ತನ್ನ ಅನುಮತಿಯನ್ನಿತ್ತಾಗ, ನಡೆದ ಲೈಂಗಿಕ ಸಮಾಗಮವೂ ಬಲಾತ್ಕಾರ ಎನಿಸುತ್ತದೆ" ಎಂದು ಹೇಳುತ್ತದೆ ನಮ್ಮ ಕಾನೂನು. ನನ್ನ ಪ್ರಕಾರ ಅತ್ಯಂತ ಹಾಸ್ಯಾಸ್ಪದ ಪರಿಭಾಷೆ ಇದು. ಪರ ಪುರುಷನನ್ನು ತನ್ನ lawful ಗಂಡ ಎಂದು ಒಬ್ಬ ಮಹಿಳೆ ಭಾವಿಸುವುದು ಹೇಗೆ? ಅಂದರೆ ಅತ್ಯಂತ ಫೆಮಿನಿಸ್ಟ್ (ಸೆಕ್ಸಿಸ್ಟ್) ಕಾನೂನು ಇದಾಗಿದೆ. ಹೀಗಾಗಿ ಈ ಕಾನೂನನ್ನು ದುರುಪಯೋಗಪಡಿಸಿಕೊಳ್ಳಬೇಕೆಂದು ಒಬ್ಬ ಮಹಿಳೆಯು ಪಣ ತೊಟ್ಟರೆ, ಪುರುಷನೊಬ್ಬನನ್ನು ಜೈಲಿಗಟ್ಟುವುದು ಅತ್ಯಂತ ಸುಲಭ.

ಮೇಲಿನ ಟಿ.ಐ.ಎಸ್.ಎಸ್ ಕೇಸಿನಲ್ಲೂ ಕೂಡ ಹೀಗೆಯೇ ಆಗಿರಬಹುದಾದ ಸಂಭವವಿದೆ. ಬಲಾತ್ಕಾರ ಎಂದ ತಕ್ಷಣ ನಮ್ಮ ಸಮಾಜ ಹಿಂದೆ ಮುಂದೆ ನೋಡದೆ ಮಹಿಳೆಯನ್ನು ಪಾಪದ ವಿಕ್ಟಿಂ ಎಂಬ ಕರುಣಾಪೂರಿತ ದೃಷ್ಟಿಯಿಂದ ನೋಡುತ್ತದೆ. ಆದರೆ ಅವಳು ಸುಳ್ಳು ಹೇಳಿರಬಹುದು ಎಂಬ ಕಿಂಚಿತ್ ಯೋಚನೆಯನ್ನೂ ನಾವ್ಯಾರೂ ಮಾಡುವುದಿಲ್ಲ.ಯಾರ ಮೇಲೆ ಆಕೆ ಆರೋಪವನ್ನು ಹೋರಿಸುತ್ತಾಳೋ, ಆ ಪುರುಷರು ನಮ್ಮ ದೃಷ್ಟಿಯಲ್ಲಿ ಮಹಾ ನೀಚರಾಗಿ ಕಂಡುಬರುತ್ತಾರೆ. ಕೇಸಿನಲ್ಲಿ ನಿಜವಾಗಿ ನಡೆದದ್ದೇನು ಎಂಬ ಯೋಚನೆಯನ್ನೂ ಮಾಡದೇ ನಾವೊಂದು judgement ಗೆ ಬಂದುಬಿಟ್ಟಿರುತ್ತೇವೆ. Alleged Rapist ಗಳಿಗೆ ಗಲ್ಲು ಶಿಕ್ಷೆಯಾಗಬೇಕೇ ಅಥವಾ ಅವರನ್ನು castration ಗೆ ಒಳಪಡಿಸಬೇಕೇ ಎಂಬಂತಹ ಘನ ಚರ್ಚೆಯನ್ನೂ ಮಾಡಿ ಮುಗಿಸಿರುತ್ತೇವೆ. ನಮ್ಮ ಮೀಡಿಯಾ ಕೂಡ ಪಕ್ಷಪಾತಿಯಾಗಿ ಕೆಲಸ ಮಾಡುತ್ತವೆ. ಮಹಿಳೆಯ ಹೆಸರನ್ನು ಮುದ್ರಿಸುವುದಿಲ್ಲ. ಆದರೆ Alleged Rapist ರ ಹೆಸರನ್ನು ಮದ್ರಿಸಿಬಿಡುತ್ತಾರೆ. ಕೊನೆಗೆ ಅವರು ನಿರ್ದೋಷಿಗಳೆಂದು ಸಾಬೀತಾಗಿಬಿಟ್ಟರೆ, ಅವರಿಗಾದ ನಷ್ಟದ ಜವಾಬ್ದಾರಿ ಯಾರ ಮೇಲೆ ಎನ್ನುವುದಕ್ಕೆ ಯಾರ ಬಳಿಯೂ ಉತ್ತರವಿರುವುದಿಲ್ಲ. Innocent until proven guilty ಎಂದು ನಮ್ಮ ಕಾನೂನೇ ಹೇಳುತ್ತದೆ. ಹೀಗಿರುವಾಗ ನಾವ್ಯಾಕೆ ಕೇಸು ಬಗೆಹರಿಯುವ ತನಕ ಪೂರ್ವಾಗ್ರಹವಿಲ್ಲದೇ, ನಿಷ್ಪಕ್ಷಪಾತವಾಗಿ ಯೋಚನೆ ಮಾಡುವುದಿಲ್ಲ?

ಈ ಟಿ.ಐ.ಎಸ್.ಎಸ್ ಕೇಸನ್ನೇ ನೋಡೋಣ. ಬಲಾತ್ಕಾರಕ್ಕೆ ಒಳಗಾಗಿರಬಹುದಾದ ಹುಡುಗಿಯು ಶನಿವಾರದ ಮಧ್ಯರಾತ್ರಿ ಒಂದು ಬಿಯರ್ ಬಾರಿಗೆ ಹೋದದ್ದೇಕೆ? ಅಲ್ಲಿ ಪರಿಚಯವೇ ಇಲ್ಲದ ಹುಡುಗರು ಮದ್ಯವನ್ನು ಕುಡಿಯಲು ಕೊಟ್ಟರೆ ಇವಳು ಅದನ್ನು ಕುಡಿದದ್ದೇಕೆ? ನಂತರ ತನ್ನ ಗೆಳತಿಯೇ ಜೊತೆಗೆ ಬಾರದಿದ್ದ ಮೇಲೆ, ಅಪರಿಚಿತ ಹುಡುಗರ ಜೊತೆ ಅವಳು ನಡೆದುಬಿಟ್ಟಿದ್ದೇಕೆ? ದೇವನಾರ್ ನಿಂದ ಅಂಧೇರಿ ಬಹುದೂರ. ಅಲ್ಲಿಯವರೆಗೆ ಡ್ರೈವ್ ಮಾಡುವ ತನಕ ಆಕೆ ಯಾಕೆ ಸುಮ್ಮನಿದ್ದಳು? ಪರಿಚಯವೇ ಇಲ್ಲದ ಪುರುಷನೊಬ್ಬನ ಫ್ಲಾಟ್ ಗೆ ಹೋಗಲು ಆಕೆ ಒಪ್ಪಿಗೆಯನ್ನಿತ್ತದ್ದೇಕೆ? ಅಲ್ಲಿ ತಲುಪಿದ ನಂತರ ಹೆದರಿಕೆಯಾಗಿ ತನ್ನ ಬಾಯ್ ಫ್ರೆಂಡ್ ಗ ಫೋನ್ ಮಾಡಿದವಳು, ಪೋಲೀಸರಿಗೆ ಫೋನ್ ಮಾಡಲಿಲ್ಲವೇಕೆ? ಬಲಾತ್ಕಾರ ನಡೆದದ್ದು ಶನಿವಾರ ಎನ್ನುತ್ತಾಳೆ ಆಕೆ. ಹಾಗಾದರೆ ಪೋಲೀಸ್ ಶಿಕಾಯತ್ತು ದರ್ಜು ಮಾಡಲು, ಮಂಗಳವಾರದವರೆಗೆ ಅವಳು ಯಾಕೆ ಕಾಯುತ್ತಿದ್ದಳು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಕ್ಕು, ಅವಳು ಸಮರ್ಪಕವಾಗಿ ಉತ್ತರ ಕೊಟ್ಟದ್ದೇ ಆದರೆ, ನಿಜವಾಗಿಯೂ ಆ ಹುಡುಗರು ಬಲಾತ್ಕಾರವನ್ನೆಸಗಿದ್ದಾರೆ ಎಂಬುದು ಸಾಬೀತಾದರೆ ಆ ಹುಡುಗರಿಗೆ ಅತ್ಯಂತ ಕಠಿಣ ಶಿಕ್ಷೆಯಾಗಬೇಕಾದದ್ದೇ. ಆದರೆ ಅಲ್ಲಿಯವರೆಗೆ ನಾವು ಯಾವುದೇ judgement ಗೆ ಬಾರದೇ, ನಿಷ್ಪಕ್ಷವಾಗಿ ಯೋಚಿಸುವುದು ನಮ್ಮ ಕರ್ತವ್ಯವಲ್ಲವೇ?

ಆ ಹುಡುಗಿ ನಿಜವಾಗಿಯೂ ಬಲಾತ್ಕಾರಕ್ಕೊಳಗಾಗಿದ್ದರೆ, ನ್ಯಾಯಾಲಯದಲ್ಲಿ ಅದು ಸಾಬೀತಾದರೆ ಇಡಿ ಸಮಾಜ ಅವಳ ಬೆಂಬಲಕ್ಕೆ ನಿಲ್ಲಬೇಕು. ಬಲಾತ್ಕಾರ ಮಾಡಿದ ಪುಂಡ ಹುಡುಗರಿಗೆ ಶಿಕ್ಷೆಯೂ ಆಗಬೇಕು. ಆದರೆ ನ್ಯಾಯಾಲಯದಲ್ಲಿ ಅಪರಾಧವು ಸಾಬೀತಾಗುವವರೆಗೆ, ನಾವು ಅವರನ್ನು villify ಮಾಡುವುದು ಬೇಡ.